Monday, April 7, 2014

:ಸ್ವಗತ ೨:


ಒಂದು ಹನಿ ಕಣ್ಣಾಲಿಯಂಚಿನಲಿ ಕಾಯುತಿದೆ ಉರುಳಬಹುದೇ?
ಸಖಿ ಉರುಳಬಹುದೇ?
ನಿನ್ನ ಅಪ್ಪಣೆಯರಿತು ಮಿಡಿದಿದ್ದ ಹೃದಯವಿದು ತಡೆಯಲಾರದೆ ಇಂದು ಕೇಳುತಿಹುದು
ಅಪ್ಪಣೆಯೇ ಹೇಳು ಹನಿ ಉರುಳಬಹುದೇ?
ಪರವಶದ ನಿಮಿಷಗಳ ದಾಟಿ ಮಾತು ಮೌನದ  ಕದವ ತಟ್ಟುತಿಹುದು
ಕಟ್ಟಿದ್ದ ಪದ್ಯಗಳು ಬಿಗುಮಾನಕೆರವಾಗಿ ಎದೆಯ ಒಳಗಿನ ದನಿಯ ತಾಕುತಿಹುದು
ಹೊರಳು ಹೊರಳಿಗೂ ಕನಲಿ ನರಳುತಿಹುದು...
ನೋವಾಗಿ ನೆನಪಾಗಿ ಒಲುಮೆಯೇ ಒಡಪಾಗಿ
ಪ್ರಶ್ನ ಚಿನ್ಹೆಯ ಹಾಗೆ ಕಾಡುತಿಹುದು!

(ಶ್ರೀನಿವಾಸ ಪಶುಪತಿ, 2014)

No comments:

Post a Comment